Monday, 28 November 2016

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್

ಬಿಲ್ಲವ ಸಮಾಜದ ಆರಾಧನಾ ಕೇಂದ್ರ
ಕೋಟಿ-ಚೆನ್ನಯ ಮೂಲಸ್ಥಾನ
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಇರುವ ಕ್ಷೇತ್ರದ ಜಾಗವನ್ನು ಸಮತಟ್ಟು ಮಾಡುವ ಕೆಲಸ ಕಾರ್ಯಗಳು ಶ್ರೀ ಕ್ಷೇತ್ರದಲ್ಲಿ ಭರದಿಂದ ಸಾಗುತ್ತಿದೆ.

ಶ್ರೀ ನವೀನ್ ಸುವರ್ಣರವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಜಾಗವನ್ನು ಸಮತಟ್ಟು ಮಾಡುವ ಸಂಪೂರ್ಣ ಕೆಲಸ ಕಾರ್ಯವನ್ನು ವಹಿಸಿಕೊಂಡು ಬಹುದೊಡ್ಡ ಮೊತ್ತದ ಕೊಡುಗೆಯನ್ನು ಶ್ರೀ ಕ್ಷೇತ್ರಕ್ಕೆ ತಮ್ಮ ಉಚಿತ ಸೇವೆಯ ರೂಪದಲ್ಲಿ ಮಾಡುತ್ತಿದ್ದಾರೆ.
ಹಾಗೂ ಇವರಿಗೆ ಮಾತೃಭೂಮಿ ಡೆವಲ್ಪರ್ಸ್ ಮಂಗಳೂರಿನ ಬೈಕಂಪಾಡಿಯಲ್ಲಿ ಜೆಸಿಬಿ ಕಂಪನಿ ಇದ್ದು ಇವರ ಜೆಸಿಬಿ, ಟಿಪ್ಪರ್ ಹಾಗೂ ಶ್ರೀ ಸುಶಾನ್ ಸುವರ್ಣ ಮತ್ತು ಶ್ರೀ ಸತೀಶ್ ಇರುವೈಲ್ ಇವರ ಮೂಲಕ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಶ್ರೀ ಕ್ಷೇತ್ರದ ಜಾಗವನ್ನು ಅಕ್ಕೋಬರ್ 26 ತಾರೀಕಿನಿಂದ  ದಿನದಲ್ಲಿ 12 & 18 ಗಂಟೆಗಳ ಕಾಲ ನಿರಂತರ ಜೆಸಿಬಿ ಚಾಲನೆಯಲ್ಲಿ ಇದ್ದು ಕ್ಷೇತ್ರದ ಜಾಗವನ್ನು ಸಮತಟ್ಟು ಮಾಡುವ ಕೆಲಸ ಕಾರ್ಯವನ್ನು ಯಶಸ್ವಿಯಾಗಿ ನಡೆಸಿ ಕೊಡುತ್ತಿದ್ದಾರೆ.

ಶ್ರೀ ಕ್ಷೇತ್ರದ ಜಾಗವನ್ನು ಸಮತಟ್ಟು ಮಾಡುವ ಕೆಲಸ ಕಾರ್ಯವನ್ನು ಶ್ರೀ ಕ್ಷೇತ್ರಕ್ಕೆ ಉಚಿತ ಸೇವೆ ಮಾಡುತ್ತಿರುವ ಶ್ರೀ ನವೀನ್ ಸುವರ್ಣ ಹಾಗೂ ಅವರ ಕುಟುಂಬದವರಿಗೆ ಆದಿ ಧರ್ಮದೈವ ಧೂಮಾವತಿಯ, ಕ್ಷೇತ್ರದ ಪರಿವಾರ ದೈವಗಳ ಮಾತೆ ದೇಯಿಬೈದ್ಯೆತಿಯವರ ಗುರು ಸಾಯನ ಬೈದ್ಯರ ಹಾಗೂ ಕೋಟಿ-ಚೆನ್ನಯರ ಅನುಗ್ರಹ ಸದಾ ಇರಲಿ ಅಂತ ಕೇಳಿಕೊಳ್ಳುತ್ತೇವೆ.
ಸ್ವಾಮಿ ಬ್ರಹ್ಮ ಬೈದ್ಯರೇ🙏

No comments:

Post a Comment