Tuesday, 13 December 2016

ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಲೀನ ಮುಂಬೈ

ಪ್ರಿಯಾ ಸಧ್ಭಕ್ತರೆ,
ಇದೇ ಬರುವ ಆದಿತ್ಯವಾರ ತಾ. 18/12/16 ರಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ (ರಿ) ಕಲೀನ ಇದರ 5ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾ ಪೂಜೆ ನಡೆಯಲಿದ್ದು, ಅಂದಿನ ದಿನ "ಗೆಜ್ಜೆಗಿರಿ ನಂದನ" ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನ ಮಹಿಮೆಯನ್ನು ಸಾರುವ ಸುಮಧುರವಾದ ಭಕ್ತಿಗೀತೆ ಅಡಿಯೋ ಸಿಡಿಯ ಬಿಡುಗಡೆಗೊಳ್ಳಲಿದ್ದು ನಿರ್ಮಾಪಕರಾದ  ಶ್ರೀ ರಮೇಶ್ ಸಾಲಿಯಾನ್ ಬಜಗೋಳಿ, ನಾಗೇಶ್ ಪೂಜಾರಿ ಇರುವೈಲು, ಸಂತೋಷ್ ಪೂಜಾರಿ ಇನ್ನ, ರವೀಂದ್ರ ಕರ್ಕೆರ,ಲೀಲಾಗಣೇಶ್ ಪೂಜಾರಿ  ಸಿಡಿ ಯನ್ನು ಬಿಡುಗಡೆ ಮಾಡಲಿದ್ದಾರೆ. ಇದರಿಂದ ಸಂಗ್ರಹವಾದ  ನಿಧಿಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ  ನಂದನ ಬಿತ್ತ್ ಲ್ ಕ್ಷೇತ್ರಾಭಿವೃದ್ದಿ ಜೀರ್ಣೋದ್ಧಾರಕ್ಕೆ ಸಂಪೂರ್ಣ ಸೇವಾ ರೂಪಕವಾಗಿ  ಶ್ರೀ ಕ್ಷೇತ್ರಕ್ಕೆ ಅರ್ಪಣೆ ಆಗಲಿದೆ. ಹಾಗಾಗಿ ಪ್ರತಿ ಒಬ್ಬರು ಸಿಡಿಯನ್ನು ತೆಗೆದುಕೊಂಡು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಗೆ ನೀವೂ ಅರ್ಪೀಸುವ ಕಾಣಿಕೆ ಎಂದು ತಿಳಿದು, ಎಲ್ಲರೂ ಈ ಒಳ್ಳೆಯ ಕೆಲಸಕ್ಕೆ ಒಂದೊಂದು ಸಿಡಿಯನ್ನು ತೆಗೆದುಕೊಂಡು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕೆಲಸಕ್ಕೆ ಕೈ ಜೋಡಿಸಬೇಕಾಗಿ ವಿನಂತಿಸುತ್ತಿದ್ದೇವೆ 🙏�🙏.

No comments:

Post a Comment