Sunday, 25 December 2016

ಮಹಾ ಧನ್ವಂತರಿ ಯಾಗ

ಡಿಸೆಂಬರ್ 30ರಂದು ಗೆಜ್ಜೆಗಿರಿಯಲ್ಲಿ ಮಹಾ ಧನ್ವಂತರಿ ಯಾಗ

ಪುತ್ತೂರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನವಾದ ಪುತ್ತೂರು ತಾಲೂಕಿನ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಡಿಸೆಂಬರ್ 30ರಂದು ಅತ್ಯಪೂವ೯ ಧನ್ವಂತರಿ ಮಹಾ ಯಾಗ ನಡೆಯಲಿದೆ ಎಂದು ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.

ಐನೂರು ವಷ೯ಗಳ ಹಿಂದೆ ಗುರು ಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದ್ಯೆತಿಯ ಬೈದ್ಯ ಶಕ್ತಿಯಿಂದ ಪಾವನಗೊಂಡಿದ್ದ ಈ ಮಣ್ಣಲ್ಲಿ ಆ ಚೈತನ್ಯಕ್ಕೆ ಇನ್ನಷ್ಟು ಚೈತನ್ಯ ನೀಡುವ ಉದ್ದೇಶದಿಂದ ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಈ ಮಹಾ ಯಾಗ ನಡೆಯಲಿದೆ.

ಡಿ.29ರಂದು ಸಂಜೆ ಪ್ರಾಥ೯ನೆ ನಡೆದು ಲಕ್ಷ ಧನ್ವಂತರಿ ಜಪ ಆರಂಭಗೊಳ್ಳಲಿದೆ. ಸುಮಾರು ನೂರಕ್ಕಿಂತಲೂ ಅಧಿಕ ಶಾಂತಿ ವಗ೯ದ ಪುರೋಹಿತರು ಕ್ಷೇತ್ರದ ತಂತ್ರಿ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ಜಪ ಯಜ್ನ ನಡೆಸಲಿದ್ದಾರೆ.

ಡಿ.30ರಂದು ಮುಂಜಾನೆ ಯಾಗ ಆರಂಭಗೊಳ್ಳುತ್ತದೆ. ಮಧ್ಯಾಹ್ನ ಪೂಣಾ೯ಹುತಿ ನಡೆದು ಯಾಗ ಸಂಪನ್ನಗೊಳ್ಳಲಿದೆ. ಕರಾವಳಿ ಪ್ರಾಂತ್ಯದಲ್ಲಿ ತೀರಾ ಅಪೂವ೯ವಾಗಿ ನಡೆಯುವ ಯಾಗ ಇದಾಗಿದ್ದು ಲಕ್ಷಾಂತರ ರೂ. ವೆಚ್ಚ ತಗುಲಲಿದೆ.

ಡಿಸೆಂಬರ್ 31ರಂದು ಬೆಳಗ್ಗೆ ಲಘು ವಿಷ್ಣು ಯಾಗ ಮತ್ತು ಸಂಜೆ ಭೂ ವರಾಹ ಹೋಮ ನಡೆದು ಮೂಲಸ್ಥಾನ ಕ್ಷೇತ್ರ ನಿಮಾ೯ಣಕ್ಕೆ ವೇದಿಕೆ ಸಜ್ಜಾಗಲಿದೆ. ಈ ಅಪೂವ೯ ಯಾಗದಲ್ಲಿ ಹತ್ತು ಸಾವಿರ ಅಶ್ವತ್ಥ ಎಲೆ, ಹತ್ತು ಸಾವಿರ ಅಮೃತ ಬಳ್ಳಿ ಕಡ್ಡಿ, ಹತ್ತು ಸಾವಿರ ಎಕ್ಕಮಾಲೆ ಕಡ್ಡಿ, ಸಾವಿರಾರು ಕಮಲದ ಹೂಗಳು ಸೇರಿದಂತೆ ಅಪಾರ ಪ್ರಮಾಣದ ಸುವಸ್ತುಗಳ ಬಳಕೆ ಆಗಲಿದೆ.
ಯಾಗಕ್ಕಾಗಿ ಈಗಾಗಲೇ ಕ್ಷೇತ್ರದಲ್ಲಿ ಸಿದ್ಧತೆ ನಡೆದಿದೆ. ಐದು ಅಡಿ ಹದಿನೆಂಟು ಅಂಗುಲ ಉದ್ದ, ಅಗಲ ಮತ್ತು ಆಳದ ಯಾಗ ಕುಂಡ ತಯಾರಾಗುತ್ತಿದೆ.

ಜನವರಿ 1ರಂದು ಭಾನುವಾರ ಬಾಲಾಲಯ ಪ್ರತಿಷ್ಠೆ ನಡೆಯಲಿದ್ದು, ಈಗಾಗಲೇ ಎರಡು ಬಾಲಾಲಯಗಳ ನಿಮಾ೯ಣ ಕಾಯ೯ ನಡೆಯುತ್ತಿದೆ.

ಕ್ಷೇತ್ರದ ಪೂರಕ ಅಭಿವೃದ್ಧಿಗಾಗಿ ಖರೀದಿಸಲಾದ ಆರು ಎಕರೆ ಜಾಗದಲ್ಲಿ ಈಗ ಶುಚೀಕರಣ ಕೆಲಸ ನಡೆಯುತ್ತಿದೆ. ದಿನಂಪ್ರತಿ ಹತ್ತು ಆಳುಗಳು ಕೆಲಸ ಮಾಡುತ್ತಿದ್ದಾರೆ. ಈ ಜಾಗದಲ್ಲಿರುವ ತೋಟದ ಮನೆಯ ದುರಸ್ತಿ ಕಾಯ೯ವೂ ನಡೆಯುತ್ತಿದೆ.

ಕಳೆದ 2016ರ ಜನವರಿ‌ ಮತ್ತು ಮಾಚ್೯ನಲ್ಲಿ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಅಷ್ಟಮಂಗಲ ಚಿಂತನೆ ನಡೆದ ಬಳಿಕ ಅದರಂತೆ ಹಂತ ಹಂತದ ಕೆಲಸಗಳು ನಡೆಯುತ್ತಿವೆ.

ಮೊದಲ ಹಂತದಲ್ಲಿ ತೀಥ೯ ಬಾವಿಯ ಪುನರುತ್ಥಾನ ನಡೆಯಿತು. ಎರಡನೇ ಹಂತದಲ್ಲಿ ಏಪ್ರಿಲ್ 29, 2016ರಂದು ಕೋಟಿ ಚೆನ್ನಯ ಮೂಲಸ್ಥಾನ ಗರಡಿ ಮತ್ತು ಸಾಯನ ಬೈದ್ಯರು- ದೇಯಿ ಬೈದ್ಯೆತಿ ಧಮ೯ ಚಾವಡಿ ನಿಮಾ೯ಣಕ್ಕೆ ಶಿಲಾ‌ ಪರಿಗ್ರಹ, ಶಿಲಾ ಪೂಜನ ನಡೆಯಿತು.

ಮುಂದಿನ ಹಂತದಲ್ಲಿ ನವೆಂಬರ್ 12,13ರಂದು ಕ್ಷೇತ್ರದ ಆದಿ ದೈವ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಣವ, ಯಜಮಾನ ಗಡಿ ಪ್ರದಾನ ಹಾಗೂ ಸ್ವಣ೯ ನಿಧಿ ಕುಂಭ ಸ್ಥಾಪನೆ ನಡೆಯಿತು.
ಇವೆಲ್ಲದರ ಮುಂದಿನ ಹಂತದಲ್ಲಿ ಮಹಾ ಯಾಗ ನಡೆಯಲಿದೆ.

2017ರ ಫೆಬ್ರುವರಿ 19ರಂದು ಭಾನುವಾರ ಕ್ಷೇತ್ರ ಪುನರುತ್ಥಾನಕ್ಕೆ ಶಿಲಾನ್ಯಾಸ ನಡೆಯಲಿದೆ.
ಧೂಮಾವತಿ - ಕುಪ್ಪೆ ಪಂಜುಲಿ೯ ದೈವಸ್ಥಾನ, ಬೆಮೆ೯ರ್ ಗುಂಡ, ಗುರು ಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದ್ಯೆತಿ ಧಮ೯ ಚಾವಡಿ, ಕೋಟಿ ಚೆನ್ನಯ ಮೂಲಸ್ಥಾನ ಗರಡಿ, ಮಾತೆಯ ಮಹಾ ಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಈ ಸಾನಿಧ್ಯಗಳಿಗೆ ಶಿಲಾನ್ಯಾಸ ಕಾಯ೯ಕ್ರಮ, ಸಭಾ ಕಾಯ೯ಕ್ರಮ ನಡೆಯಲಿದೆ.

ಇದಕ್ಕೂ ಮುನ್ನ ಅಂದು ಬೆಳಗ್ಗೆ 9 ಗಂಟೆಗೆ ಪುತ್ತೂರು ನಗರದ ದಬೆ೯ ಬಳಿಯ ಗೆಜ್ಜೆಗಿರಿ ಮಹಾ ದ್ವಾರದ ಬಳಿಯಿಂದ ಬೃಹತ್ ವಾಹನ ಜಾಥಾ ನಡೆಯಲಿದೆ. ನಾನಾ ತಾಲೂಕುಗಳಿಂದ ಬರುವ ಭಕ್ತರು ಇಲ್ಲಿಂದ ಜಾಥಾದಲ್ಲಿ 22 k.m. ದೂರದ ಗೆಜ್ಜೆಗಿರಿಗೆ ತೆರಳಲಿದ್ದಾರೆ. ಜಾಥಾದಲ್ಲಿ ಪಾಲ್ಗೊಳ್ಲುವ ಎಲ್ಲ ವಾಹಗಳಲ್ಲಿ ಕ್ಷೇತ್ರದ ಪತಾಕೆ ಇರಲಿದೆ.

ಮೇಲಿನ ಎಲ್ಲ ಕಾಯ೯ಕ್ರಮಗಳಲ್ಲಿ ಸವ೯ ಕೋಟಿ ಚೆನ್ನಯ ಭಕ್ತರು ಪಾಲ್ಗೊಂಡು ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನದ ಮಹಾ ಪವ೯ಕ್ಕೆ ತನು ಮನ ಧನಗಳ ನೆರವು ನೀಡಬೇಕೆಂದು ಕ್ಷೇತ್ರಾಡಳಿತ ಸಮಿತಿ ವಿನಂತಿಸಿದೆ.

ತುಳುನಾಡಿನಲ್ಲಿರುವ ಎಲ್ಲ ಗರಡಿಗಳಿಗೂ ಮೂಲವಾಗಲಿರುವ, ಈ ಮೂಲಸ್ಥಾನ ಗರಡಿಯ ನಿಮಾ೯ಣದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಪ್ರಾಥ೯ನೆ.

ಐನೂರು ವಷ೯ಗಳಲ್ಲಿ ನಡೆಯದ ಐತಿಹಾಸಿಕ ವಿದ್ಯಮಾನ ಈಗ ನಡೆಯುತ್ತಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ.

No comments:

Post a Comment