Sunday, 25 December 2016

ಮಹಾ ಧನ್ವಂತರಿ ಯಾಗ

ಡಿಸೆಂಬರ್ 30ರಂದು ಗೆಜ್ಜೆಗಿರಿಯಲ್ಲಿ ಮಹಾ ಧನ್ವಂತರಿ ಯಾಗ

ಪುತ್ತೂರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನವಾದ ಪುತ್ತೂರು ತಾಲೂಕಿನ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಡಿಸೆಂಬರ್ 30ರಂದು ಅತ್ಯಪೂವ೯ ಧನ್ವಂತರಿ ಮಹಾ ಯಾಗ ನಡೆಯಲಿದೆ ಎಂದು ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.

ಐನೂರು ವಷ೯ಗಳ ಹಿಂದೆ ಗುರು ಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದ್ಯೆತಿಯ ಬೈದ್ಯ ಶಕ್ತಿಯಿಂದ ಪಾವನಗೊಂಡಿದ್ದ ಈ ಮಣ್ಣಲ್ಲಿ ಆ ಚೈತನ್ಯಕ್ಕೆ ಇನ್ನಷ್ಟು ಚೈತನ್ಯ ನೀಡುವ ಉದ್ದೇಶದಿಂದ ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಈ ಮಹಾ ಯಾಗ ನಡೆಯಲಿದೆ.

ಡಿ.29ರಂದು ಸಂಜೆ ಪ್ರಾಥ೯ನೆ ನಡೆದು ಲಕ್ಷ ಧನ್ವಂತರಿ ಜಪ ಆರಂಭಗೊಳ್ಳಲಿದೆ. ಸುಮಾರು ನೂರಕ್ಕಿಂತಲೂ ಅಧಿಕ ಶಾಂತಿ ವಗ೯ದ ಪುರೋಹಿತರು ಕ್ಷೇತ್ರದ ತಂತ್ರಿ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ಜಪ ಯಜ್ನ ನಡೆಸಲಿದ್ದಾರೆ.

ಡಿ.30ರಂದು ಮುಂಜಾನೆ ಯಾಗ ಆರಂಭಗೊಳ್ಳುತ್ತದೆ. ಮಧ್ಯಾಹ್ನ ಪೂಣಾ೯ಹುತಿ ನಡೆದು ಯಾಗ ಸಂಪನ್ನಗೊಳ್ಳಲಿದೆ. ಕರಾವಳಿ ಪ್ರಾಂತ್ಯದಲ್ಲಿ ತೀರಾ ಅಪೂವ೯ವಾಗಿ ನಡೆಯುವ ಯಾಗ ಇದಾಗಿದ್ದು ಲಕ್ಷಾಂತರ ರೂ. ವೆಚ್ಚ ತಗುಲಲಿದೆ.

ಡಿಸೆಂಬರ್ 31ರಂದು ಬೆಳಗ್ಗೆ ಲಘು ವಿಷ್ಣು ಯಾಗ ಮತ್ತು ಸಂಜೆ ಭೂ ವರಾಹ ಹೋಮ ನಡೆದು ಮೂಲಸ್ಥಾನ ಕ್ಷೇತ್ರ ನಿಮಾ೯ಣಕ್ಕೆ ವೇದಿಕೆ ಸಜ್ಜಾಗಲಿದೆ. ಈ ಅಪೂವ೯ ಯಾಗದಲ್ಲಿ ಹತ್ತು ಸಾವಿರ ಅಶ್ವತ್ಥ ಎಲೆ, ಹತ್ತು ಸಾವಿರ ಅಮೃತ ಬಳ್ಳಿ ಕಡ್ಡಿ, ಹತ್ತು ಸಾವಿರ ಎಕ್ಕಮಾಲೆ ಕಡ್ಡಿ, ಸಾವಿರಾರು ಕಮಲದ ಹೂಗಳು ಸೇರಿದಂತೆ ಅಪಾರ ಪ್ರಮಾಣದ ಸುವಸ್ತುಗಳ ಬಳಕೆ ಆಗಲಿದೆ.
ಯಾಗಕ್ಕಾಗಿ ಈಗಾಗಲೇ ಕ್ಷೇತ್ರದಲ್ಲಿ ಸಿದ್ಧತೆ ನಡೆದಿದೆ. ಐದು ಅಡಿ ಹದಿನೆಂಟು ಅಂಗುಲ ಉದ್ದ, ಅಗಲ ಮತ್ತು ಆಳದ ಯಾಗ ಕುಂಡ ತಯಾರಾಗುತ್ತಿದೆ.

ಜನವರಿ 1ರಂದು ಭಾನುವಾರ ಬಾಲಾಲಯ ಪ್ರತಿಷ್ಠೆ ನಡೆಯಲಿದ್ದು, ಈಗಾಗಲೇ ಎರಡು ಬಾಲಾಲಯಗಳ ನಿಮಾ೯ಣ ಕಾಯ೯ ನಡೆಯುತ್ತಿದೆ.

ಕ್ಷೇತ್ರದ ಪೂರಕ ಅಭಿವೃದ್ಧಿಗಾಗಿ ಖರೀದಿಸಲಾದ ಆರು ಎಕರೆ ಜಾಗದಲ್ಲಿ ಈಗ ಶುಚೀಕರಣ ಕೆಲಸ ನಡೆಯುತ್ತಿದೆ. ದಿನಂಪ್ರತಿ ಹತ್ತು ಆಳುಗಳು ಕೆಲಸ ಮಾಡುತ್ತಿದ್ದಾರೆ. ಈ ಜಾಗದಲ್ಲಿರುವ ತೋಟದ ಮನೆಯ ದುರಸ್ತಿ ಕಾಯ೯ವೂ ನಡೆಯುತ್ತಿದೆ.

ಕಳೆದ 2016ರ ಜನವರಿ‌ ಮತ್ತು ಮಾಚ್೯ನಲ್ಲಿ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಅಷ್ಟಮಂಗಲ ಚಿಂತನೆ ನಡೆದ ಬಳಿಕ ಅದರಂತೆ ಹಂತ ಹಂತದ ಕೆಲಸಗಳು ನಡೆಯುತ್ತಿವೆ.

ಮೊದಲ ಹಂತದಲ್ಲಿ ತೀಥ೯ ಬಾವಿಯ ಪುನರುತ್ಥಾನ ನಡೆಯಿತು. ಎರಡನೇ ಹಂತದಲ್ಲಿ ಏಪ್ರಿಲ್ 29, 2016ರಂದು ಕೋಟಿ ಚೆನ್ನಯ ಮೂಲಸ್ಥಾನ ಗರಡಿ ಮತ್ತು ಸಾಯನ ಬೈದ್ಯರು- ದೇಯಿ ಬೈದ್ಯೆತಿ ಧಮ೯ ಚಾವಡಿ ನಿಮಾ೯ಣಕ್ಕೆ ಶಿಲಾ‌ ಪರಿಗ್ರಹ, ಶಿಲಾ ಪೂಜನ ನಡೆಯಿತು.

ಮುಂದಿನ ಹಂತದಲ್ಲಿ ನವೆಂಬರ್ 12,13ರಂದು ಕ್ಷೇತ್ರದ ಆದಿ ದೈವ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಣವ, ಯಜಮಾನ ಗಡಿ ಪ್ರದಾನ ಹಾಗೂ ಸ್ವಣ೯ ನಿಧಿ ಕುಂಭ ಸ್ಥಾಪನೆ ನಡೆಯಿತು.
ಇವೆಲ್ಲದರ ಮುಂದಿನ ಹಂತದಲ್ಲಿ ಮಹಾ ಯಾಗ ನಡೆಯಲಿದೆ.

2017ರ ಫೆಬ್ರುವರಿ 19ರಂದು ಭಾನುವಾರ ಕ್ಷೇತ್ರ ಪುನರುತ್ಥಾನಕ್ಕೆ ಶಿಲಾನ್ಯಾಸ ನಡೆಯಲಿದೆ.
ಧೂಮಾವತಿ - ಕುಪ್ಪೆ ಪಂಜುಲಿ೯ ದೈವಸ್ಥಾನ, ಬೆಮೆ೯ರ್ ಗುಂಡ, ಗುರು ಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದ್ಯೆತಿ ಧಮ೯ ಚಾವಡಿ, ಕೋಟಿ ಚೆನ್ನಯ ಮೂಲಸ್ಥಾನ ಗರಡಿ, ಮಾತೆಯ ಮಹಾ ಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಈ ಸಾನಿಧ್ಯಗಳಿಗೆ ಶಿಲಾನ್ಯಾಸ ಕಾಯ೯ಕ್ರಮ, ಸಭಾ ಕಾಯ೯ಕ್ರಮ ನಡೆಯಲಿದೆ.

ಇದಕ್ಕೂ ಮುನ್ನ ಅಂದು ಬೆಳಗ್ಗೆ 9 ಗಂಟೆಗೆ ಪುತ್ತೂರು ನಗರದ ದಬೆ೯ ಬಳಿಯ ಗೆಜ್ಜೆಗಿರಿ ಮಹಾ ದ್ವಾರದ ಬಳಿಯಿಂದ ಬೃಹತ್ ವಾಹನ ಜಾಥಾ ನಡೆಯಲಿದೆ. ನಾನಾ ತಾಲೂಕುಗಳಿಂದ ಬರುವ ಭಕ್ತರು ಇಲ್ಲಿಂದ ಜಾಥಾದಲ್ಲಿ 22 k.m. ದೂರದ ಗೆಜ್ಜೆಗಿರಿಗೆ ತೆರಳಲಿದ್ದಾರೆ. ಜಾಥಾದಲ್ಲಿ ಪಾಲ್ಗೊಳ್ಲುವ ಎಲ್ಲ ವಾಹಗಳಲ್ಲಿ ಕ್ಷೇತ್ರದ ಪತಾಕೆ ಇರಲಿದೆ.

ಮೇಲಿನ ಎಲ್ಲ ಕಾಯ೯ಕ್ರಮಗಳಲ್ಲಿ ಸವ೯ ಕೋಟಿ ಚೆನ್ನಯ ಭಕ್ತರು ಪಾಲ್ಗೊಂಡು ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನದ ಮಹಾ ಪವ೯ಕ್ಕೆ ತನು ಮನ ಧನಗಳ ನೆರವು ನೀಡಬೇಕೆಂದು ಕ್ಷೇತ್ರಾಡಳಿತ ಸಮಿತಿ ವಿನಂತಿಸಿದೆ.

ತುಳುನಾಡಿನಲ್ಲಿರುವ ಎಲ್ಲ ಗರಡಿಗಳಿಗೂ ಮೂಲವಾಗಲಿರುವ, ಈ ಮೂಲಸ್ಥಾನ ಗರಡಿಯ ನಿಮಾ೯ಣದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಪ್ರಾಥ೯ನೆ.

ಐನೂರು ವಷ೯ಗಳಲ್ಲಿ ನಡೆಯದ ಐತಿಹಾಸಿಕ ವಿದ್ಯಮಾನ ಈಗ ನಡೆಯುತ್ತಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ.

Tuesday, 20 December 2016

ಶ್ರೀ ಕ್ಷೇತ್ರ ಗೆಜ್ಜೆಗಿರಿ

ಶ್ರೀ ಕ್ಷೇತ್ರದ ಸೇವೆ ಮಲ್ಪುನ "ಓಮನ್ ಬಿಲ್ಲವಾಸ್" ಸಂಘಟನೆದ ಮಾತಾ ಸದಸ್ಯೆರೆಗ್ ಕ್ಷೇತ್ರದ ಸರ್ವ ಶಕ್ತಿಲು ಆಯುರಾರೋಗ್ಯನು ಕೊರುದು ಅಕ್ಲೆನ ಕೆಲಸಡ್ ಬೆಲಿಸಾಯ ಆದ್ ಉಂತಡ್ ಪಂದ್ ನಮ್ಮ ಪ್ರಾರ್ಥನೆ.

Tuesday, 13 December 2016

ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಲೀನ ಮುಂಬೈ

ಪ್ರಿಯಾ ಸಧ್ಭಕ್ತರೆ,
ಇದೇ ಬರುವ ಆದಿತ್ಯವಾರ ತಾ. 18/12/16 ರಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ (ರಿ) ಕಲೀನ ಇದರ 5ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾ ಪೂಜೆ ನಡೆಯಲಿದ್ದು, ಅಂದಿನ ದಿನ "ಗೆಜ್ಜೆಗಿರಿ ನಂದನ" ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನ ಮಹಿಮೆಯನ್ನು ಸಾರುವ ಸುಮಧುರವಾದ ಭಕ್ತಿಗೀತೆ ಅಡಿಯೋ ಸಿಡಿಯ ಬಿಡುಗಡೆಗೊಳ್ಳಲಿದ್ದು ನಿರ್ಮಾಪಕರಾದ  ಶ್ರೀ ರಮೇಶ್ ಸಾಲಿಯಾನ್ ಬಜಗೋಳಿ, ನಾಗೇಶ್ ಪೂಜಾರಿ ಇರುವೈಲು, ಸಂತೋಷ್ ಪೂಜಾರಿ ಇನ್ನ, ರವೀಂದ್ರ ಕರ್ಕೆರ,ಲೀಲಾಗಣೇಶ್ ಪೂಜಾರಿ  ಸಿಡಿ ಯನ್ನು ಬಿಡುಗಡೆ ಮಾಡಲಿದ್ದಾರೆ. ಇದರಿಂದ ಸಂಗ್ರಹವಾದ  ನಿಧಿಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿ  ನಂದನ ಬಿತ್ತ್ ಲ್ ಕ್ಷೇತ್ರಾಭಿವೃದ್ದಿ ಜೀರ್ಣೋದ್ಧಾರಕ್ಕೆ ಸಂಪೂರ್ಣ ಸೇವಾ ರೂಪಕವಾಗಿ  ಶ್ರೀ ಕ್ಷೇತ್ರಕ್ಕೆ ಅರ್ಪಣೆ ಆಗಲಿದೆ. ಹಾಗಾಗಿ ಪ್ರತಿ ಒಬ್ಬರು ಸಿಡಿಯನ್ನು ತೆಗೆದುಕೊಂಡು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಗೆ ನೀವೂ ಅರ್ಪೀಸುವ ಕಾಣಿಕೆ ಎಂದು ತಿಳಿದು, ಎಲ್ಲರೂ ಈ ಒಳ್ಳೆಯ ಕೆಲಸಕ್ಕೆ ಒಂದೊಂದು ಸಿಡಿಯನ್ನು ತೆಗೆದುಕೊಂಡು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕೆಲಸಕ್ಕೆ ಕೈ ಜೋಡಿಸಬೇಕಾಗಿ ವಿನಂತಿಸುತ್ತಿದ್ದೇವೆ 🙏�🙏.

Monday, 12 December 2016

ಮುಂಬೈ ಗೆಜ್ಜೆಗಿರಿ ಸಿ.ಡಿ‌ ಬಿಡುಗಡೆ

ಶ್ರೀ ಕ್ಷೇತ್ರದ ಒಂದು ‌ನೋಟ

ಕೊಡಗು ಜಿಲ್ಲಾ ಕೋಟಿ ಚೆನ್ನಯ ಕ್ರೀಡಾಕೂಟ

ಕೊಡಗು ಜಿಲ್ಲೆಯ ಶೂಂಠಿಕೊಪ್ಪದಲ್ಲಿ ಇಂದು ತಾರೀಕು ಡಿಸೆಂಬರ್ 12 ರಂದ್ದು ನಡೆದ ಕೊಡಗು ಜಿಲ್ಲಾ ಮಟ್ಟದ ಕೋಟಿ-ಚೆನ್ನಯ ಕ್ರೀಢಾಕೂಟ 2016 ರ ಬಿರುವೆರೆ ಚಾವಡಿ  ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ  ಕಿಕ್ಕಿರಿದು ಸೇರಿದ ಬಿಲ್ಲವರ ಬಾಂಧವರ ಜನಸ್ತೋಮದಲ್ಲಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರದ ಮಹಿಮೆಯನ್ನು ಸಾರುವ ಗೆಜ್ಜೆಗಿರಿ ನಂದನ ತುಳು ಭಕ್ತಿಗೀತೆ ಸಿ.ಡಿ ಕೇಸೆಟನ್ನು ಬಿಡುಗಡೆ ಮಾಡಲಾಯಿತು ಈ ಸಂದರ್ಭದಲ್ಲಿ ಕ್ಷೇತ್ರಾಡಳಿತದ ಸಮಿತಿಯ  ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಪೂಜಾರಿ, ಕಾರ್ಯಧ್ಯಕ್ಷರಾದ ಶ್ರೀ ಪಿತಾಂಬರ್ ಹೆರಾಜೆ, ಶ್ರೀ ಜಯಂತ ನಡುಬೈಲು, ಶ್ರೀ ಉಲ್ಲಾಸ್ ಕೊಟ್ಯಾನ್ ಹಾಗೂ ಕೊಡಗು ಜಿಲ್ಲಾ ಬಿಲ್ಲವ ಅಧ್ಯಕ್ಷರಾದ ಶ್ರೀ ಆನಂದ ರಘು, ಆರು ತಾಲೂಕಿನ ಬಿಲ್ಲವ ಅಧ್ಯಕ್ಷರು, ಮೂರು ಸ್ಥಳಿಯ ಶಾಸಕರು, ಗಣ್ಯ ಅತಿಥಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬಿಲ್ಲವ ಬಾಂಧವರು ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ 
ಕೊಡಗು ಜಿಲ್ಲಾ ಬಿಲ್ಲವ ಸಮಾಜ ಬಾಂಧವರಿಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರದ ಸರ್ವ ಶಕ್ತಿಗಲು ಅನುಗ್ರಹಿಸಲಿ.
ಸ್ವಾಮಿ ಬ್ರಹ್ಮ ಬೈದೆರ್ಲೆ🙏

Sunday, 11 December 2016

ಮುಲ್ಕಿ ಯುವವಾಹಿನಿ ವತಿಯಿಂದ ಶ್ರೀ ಕ್ಷೇತ್ರಕ್ಕೆ ಗಡಿಯಾರ ಕೊಡುಗೆ

ಮೂಲ್ಕಿ ಯುವವಾಹಿನಿಯ 55 ಜನರ ತಂಡ ಇವತ್ತು ಗೆಜ್ಜೆಗಿರಿ ನಂದನ ಬಿತ್ತ್ ಲ್ ಕ್ಷೇತ್ರಕ್ಕೆ ಭೇಟಿ ನೀಡಿ, ಯುವವಾಹಿನಿ ವತಿಯಿಂದ ಒಂದು ಗಡಿಯಾರವನ್ನು ಕ್ಷೇತ್ರಕ್ಕೆ ನೀಡಿದರು. ನಿಲ್ಲದೇ ಸದಾ ಓಡುತ್ತಿರುವ ಕಾಲದಂತೆ ಕ್ಷೇತ್ರದ ಅಭಿವ್ರದ್ದಿ ಕಾಯ೯ ಸದಾ ಸಾಗುತ್ತಿರಲಿ ಎಂದು ಹಾರೈಸಿದರು.

Saturday, 10 December 2016

ಮುಲ್ಕಿ ಯುವವಾಹಿನಿ

ಮುಲ್ಕಿಯ ಯುವವಾಹಿನಿ ತಂಡದ ಸದಸ್ಯರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.